ವಂದೇ ಭಾರತ್ ಸಮಯ ಬದಲಾವಣೆ, ಹೊಸ ಸೂಪರ್ ಫಾಸ್ಟ್ ರೈಲು ಮಾರ್ಗ ಕುರಿತು ಕೇಂದ್ರ ರೈಲ್ವೆ ಸಚಿವರೊಂದಿಗೆ ಮಹತ್ವದ ಚರ್ಚೆ
ಬೆಳಗಾವಿ: 4.12.2025
ಲೋಕಸಭಾ ಸಂಸದರಾದ ಜಗದೀಶ ಶೆಟ್ಟರ್ ಅವರು ಡಿಸೆಂಬರ್ 3, 2025 ರಂದು ನವದೆಹಲಿಯ ಸಂಸದ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಬೆಳಗಾವಿ ಮತ್ತು ಉತ್ತರ ಕರ್ನಾಟಕ ಭಾಗದ ರೈಲ್ವೆ ಯೋಜನೆಗಳ ಕುರಿತು ಮಹತ್ವದ ಮನವಿ ಸಲ್ಲಿಸಿದ್ದಾರೆ. ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ ರೈಲು ನಿಲ್ದಾಣಕ್ಕೆ ಡಾ. ಶಿವಬಸವ ಮಾಹಾಪ್ರಭು ಅವರ ಹೆಸರು ನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
*ನಾಮಕರಣ ಪ್ರಕ್ರಿಯೆಗೆ ಚುರುಕು*
ಬೆಳಗಾವಿಯ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ರೈಲು ನಿಲ್ದಾಣಕ್ಕೆ “ಡಾ. ಶಿವಬಸವ ಮಾಹಾಪ್ರಭು ಬೆಳಗಾವಿ ರೈಲು ನಿಲ್ದಾಣ” ಎಂದು ಹೆಸರಿಡುವ ಪ್ರಕ್ರಿಯೆಗೆ ಚುರುಕು ನೀಡಲು ಸಂಸದ ಶೆಟ್ಟರ್ ಅವರು ಮನವಿ ಮಾಡಿದರು. ಈ ಕುರಿತ ಪ್ರಸ್ತಾವನೆಯು ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ತಲುಪಿದೆ. ಪ್ರಸ್ತಾವನೆಗೆ ರೈಲ್ವೆ ಸಚಿವಾಲಯದ ಅಭಿಪ್ರಾಯವನ್ನು ಗೃಹ ಸಚಿವಾಲಯಕ್ಕೆ ಶೀಘ್ರವೇ ಕಳುಹಿಸಿದ್ದಲ್ಲಿ, ನಾಮಕರಣ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಶೆಟ್ಟರ್ ಅವರು ಸಚಿವರಿಗೆ ಮನದಟ್ಟು ಮಾಡಿದರು. ಇದಕ್ಕೆ ಸಚಿವರು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಯಾಣಿಕ ಸ್ನೇಹಿ ವಂದೇ ಭಾರತ್ ಸಮಯ ಪರಿವರ್ತನೆ
ಪ್ರಸ್ತುತ ಬೆಳಗಾವಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾವಣೆ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಯಿತು. ಬೆಳಗಾವಿಯಿಂದ ಪ್ರಸ್ತುತ ಬೆಳಗ್ಗೆ 5:20ಕ್ಕೆ ಇರುವ ನಿರ್ಗಮನ ಸಮಯವನ್ನು ಪ್ರಯಾಣಿಕರ ಅನುಕೂಲಕ್ಕಾಗಿ 6:15ಕ್ಕೆ ಪರಿವರ್ತಿಸುವಂತೆ ಬೇಡಿಕೆ ಇಡಲಾಯಿತು. ಈ ಕುರಿತು ಬೆಳಗಾವಿ ನಿವಾಸಿಗಳ ಅನುಕೂಲಕ್ಕೆ ಪೂರಕವಾಗಿ ಪರಿಗಣಿಸುವುದಾಗಿ ಕೇಂದ್ರ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ.
ಇದರ ಜೊತೆಗೆ, ಬೆಂಗಳೂರು – ಬೆಳಗಾವಿ – ಮುಂಬೈ ನಡುವೆ ಶೀಘ್ರವೇ ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭಿಸುವಂತೆ ಜಗದೀಶ ಶೆಟ್ಟರ್ ಅವರು ವಿನಂತಿಸಿದರು. ಇದು ವಾಣಿಜ್ಯ ಮತ್ತು ಪ್ರವಾಸಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ವಿವರಿಸಿದರು.
*ನೂತನ ರೈಲು ಮಾರ್ಗದ ಸಮೀಕ್ಷೆಗೆ ಅನುಮೋದನೆ ಭರವಸೆ*
ಮುಂದುವರೆದು, ಉತ್ತರ ಕರ್ನಾಟಕದ ರೈಲ್ವೆ ಜಾಲ ವಿಸ್ತರಣೆಗೆ ಅತ್ಯಗತ್ಯವಾಗಿರುವ ಲೋಕಾಪೂರ – ರಾಮದುರ್ಗ – ಸವದತ್ತಿ – ಧಾರವಾಡ ನಡುವಿನ ನೂತನ ರೈಲು ಮಾರ್ಗ ನಿರ್ಮಾಣದ ಕುರಿತು ನಡೆಸುವ ಸಮೀಕ್ಷೆಯ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಲಾಯಿತು. ಈ ಪ್ರಸ್ತಾವನೆಗೆ ತ್ವರಿತಗತಿಯಲ್ಲಿ ಅನುಮೋದನೆ ನೀಡುವ ಬಗ್ಗೆಯೂ ಸಚಿವ ಅಶ್ವಿನಿ ವೈಷ್ಣವ್ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಕೇಂದ್ರ ಸಚಿವರೊಂದಿಗಿನ ಈ ಮಹತ್ವದ ಚರ್ಚೆಯ ನಂತರ, ಸಂಸದ ಜಗದೀಶ ಶೆಟ್ಟರ್ ಅವರು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರೊಂದಿಗೂ ಈ ವಿಷಯಗಳ ಕುರಿತು ಚರ್ಚಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
ಖಾನಾಪುರ್ ತಾಲೂಕಿನ ನಿಡಗಲ್ ಗ್ರಾಮದ ಮರಾಠ ಸಮುದಾಯದ ಪ್ರೇಮ ವಿವಾಹವಾದ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ನ್ಯಾಯಕ್ಕಾಗಿ ದಂಪತಿಗಳು ದಲಿತ ಸಂಘಟನೆಯ ಮೊರೆ .
ಇಂದು ಖಾನಾಪುರ್ ತಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ದಲಿತ್ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ವತಿಯಿಂದ ಬಹಿಷ್ಕಾರಕ್ಕೆ ಒಳಗಾದ ಕೀರ್ತಿ. ಬೂತನಾಥ್. ಕದಂ ಅವರ ಎರಡು ಕುಟುಂಬಕ್ಕೆ...
ಇತೀಚಿಗೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ್ ನಮ್ಮ ಅಟೋ ಚಾಲಕರು ಬದುಕುವುದು ತುಂಬಾ ಕಷ್ಟವಾಗಿರುತ್ತದೆ.
ಇತೀಚಿಗೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ್ ನಮ್ಮ ಅಟೋ ಚಾಲಕರು ಬದುಕುವುದು ತುಂಬಾ ಕಷ್ಟವಾಗಿರುತ್ತದೆ. * ನಮ್ಮ ಬೇಡಿಕೆಗಳನ್ನು ಪೂರೈಸದೇ ಇದ್ದಲ್ಲಿ 3 ದಿನಗಳಲ್ಲಿ ಅನಿರದಿಷ್ಟವಾದ ಪ್ರತಿಭಟನೆ...
ಎಮಿನೆಂಟ್ ಕೋಚಿಂಗ್ ಕ್ಲಾಸಿನಲ್ಲಿ ನಡೆದಾಡುವ ದೇವರು ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಭಕ್ತಿಯ ಗುರು ನಮನ.
ಎಮಿನೆಂಟ್ ಕೋಚಿಂಗ್ ಕ್ಲಾಸ್ ಬೆಳಗಾವಿಯಲ್ಲಿ ಇಂದು ಧ್ಯಾನ ಯೋಗಿ ಜ್ಞಾನ ದಾಸೋಹಿ ನಡೆದಾಡುವ ದೇವರು ಶತಮಾನದ ಸಂತ ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ...
ಮನೆ-ಮನಗಳಿಗೆ ತಲುಪಿದ ‘ಮನೆಗೊಂದು ಗ್ರಂಥಾಲಯ*’
ಬೆಳಗಾವಿಯಲ್ಲಿ ಜಿಲ್ಲಾ ಸಮಿತಿ ರಚನೆ: ಓದು ಸಂಸ್ಕೃತಿ ವಿಸ್ತರಣೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಹೆಜ್ಜೆ ಬೆಳಗಾವಿ:15,12.2025 ಸಮಾಜದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸಿ, ಜ್ಞಾನ ಮತ್ತು ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ...
ಸಮಾಜ ಸುಧಾರಣೆಗೆ ಮಠಾಧೀಶರ ಪಾತ್ರ ಮಹತ್ವದ್ದು: ಶಾಸಕ ಬಾಲಚಂದ್ರ ಜಾರಕಿಹೊಳಿ
ಅರಭಾವಿ ಮತಕ್ಷೇತ್ರದ ಮಠಾಧೀಶರ ವೇದಿಕೆ ಉದ್ಘಾಟನೆ; ದುಶ್ಚಟ, ಮೌಢ್ಯತೆ ನಿವಾರಣೆಗೆ ಶ್ರೀಗಳ ಕರೆ ಮೂಡಲಗಿ:14.12.2025 ದೇವರು, ತಾಯಿ-ತಂದೆ, ಪೂಜ್ಯರು ಹಾಗೂ ಜನರ ಸತತ ಆಶೀರ್ವಾದದಿಂದಲೇ ನಾವು ಜಿಲ್ಲೆಯಲ್ಲಿ...





