ಬೆಳಗಾವಿ

*ತಾಳ ತಪ್ಪಿದ ಘಟಿಕೋತ್ಸವ: ನಿಯಮ ಉಲ್ಲಂಘನೆ

13Views
  1. ಸುವರ್ಣ ವಿಧಾನಸೌದದಲ್ಲಿ ಮಂಗಳವಾರ ನಡೆದ ಘಟಿಕೋತ್ಸವವೊಂದು ನಿಯಮಾವಳಿಗಳನ್ನು ಉಲ್ಲಂಘಿಸಿ ನಗೆಪಾಟಲಿಗೀಡಾದ ಪ್ರಸಂಗ ನಡೆಯಿತು.
    ​ಕಾರ್ಯಕ್ರಮದ ಆರಂಭದಲ್ಲಿ, ರಾಷ್ಟ್ರಗೀತೆ ಮತ್ತು ನಾಡಗೀತೆ ನಂತರ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರಿಂದ ಘಟಿಕೋತ್ಸವವನ್ನು ಪ್ರಾರಂಭಿಸಲು ಔಪಚಾರಿಕವಾಗಿ ಅನುಮತಿ ಪಡೆಯಬೇಕಿತ್ತು. ಆದರೆ, ಕುಲಪತಿಗಳು ಈ ನಿಯಮವನ್ನು ಪಾಲಿಸದೆ, ಮೊದಲು ಅತಿಥಿಗಳನ್ನು ಪರಿಚಯಿಸಿ, ನಂತರ ರಾಜ್ಯಪಾಲರಿಗೆ ಘಟಿಕೋತ್ಸವ ಚಾಲನೆಗೆ ಅನುಮತಿ ಕೋರಿದರು.
    ​ಕುಲಸಚಿವರು ಈ ಮೂಲಭೂತ ನಿಯಮಾವಳಿಗಳ ಬಗ್ಗೆ ತಿಳಿದಿಲ್ಲವೇ ಎಂಬ ಚರ್ಚೆಗೆ ಈ ಘಟನೆ ಸಾರ್ವಜನಿಕ ವಲಯದಲ್ಲಿ ಎಡೆಮಾಡಿಕೊಟ್ಟಿತು.

Leave a Reply