ಬೆಳಗಾವಿ

ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಳ ಸಾವು ಪ್ರಕರಣ.

13Views

ಸಾಂಕ್ರಾಮಿಕ ರೋಗ ಹರಡುವ ಭೀತಿ ವ್ಯಕ್ತಪಡಿಸಿದ ಅರಣ್ಯ ಇಲಾಖೆ.
ಮೃಗಾಲಯದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ.
ಬೆಳಗಾವಿ ತಾಲೂಕಿನ ಭೂರತರಾಮನಹಟ್ಟಿ ಗ್ರಾಮದಲ್ಲಿರೋ ಮೃಗಾಲಯ.
ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 38 ಕೃಷ್ಣಮೃಗಳ ಪೈಕಿ 31 ಸಾವು.
ರೋಗದಿಂದ 31 ಕೃಷ್ಣ ಮೃಗಗಳ ಸಾವಿನ ಶಂಕೆ ಹಿನ್ನೆಲೆ.
ಮೃಗಾಲಯದ ಸುತ್ತಲಿನ ಗ್ರಾಮದಲ್ಲೂ ರೋಗ ಹರಡುವ ಸಾಧ್ಯತೆ.
ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪತ್ರ.
ಸಸ್ಯ ಆಹಾರದ ಪ್ರಾಣಿಗಳಿಗೂ ರೋಗ ಹರಡುವ ಸಾಧ್ಯತೆ.
ಸಸ್ಯ ಆಹಾರ ಪ್ರಾಣಿಗಳನ್ನ ಸಾಕಿರುವವರು ಎಚ್ಚರಿಕೆ ವಹಿಸಲು ಸೂಚನೆ.
ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಪಶು ಇಲಾಖೆ ಅಧಿಕಾರಿಗಳಿಗೆ ಮನವಿ.

Leave a Reply